Dosa Camp

Dosa Camp Dosas are not just food ! they are an Emotion !!

07/04/2025
06/04/2025

ಶಕ ವರ್ಷ.618ರಲ್ಲಿ ಉತ್ತರದ ದೊರೆ ಹರ್ಷವರ್ಧನನು ದಕ್ಷಿಣದಲ್ಲಿ ಸಾಮ್ರಾಜ್ಯ ವಿಸ್ತರಣೆಗೆ ಮುಂದಾದಾಗ, ಕನ್ನಡದ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ಮಹಾರಾಜರು ನರ್ಮದಾ ನದಿಯ ದಡದಲ್ಲೇ ಮಣಿಸಿ ‘ಪರಮೇಶ್ವರ' ಎಂಬ ಬಿರುದು ಪಡೆದ
ಈ ದಿನವನ್ನು ‘ಕನ್ನಡಿಗರ ವಿಜಯ ದಿನ’ ವೆಂದು ಆಚರಿಸಿ, ವೀರ ಪರಾಕ್ರಮಿಗೆ ಗೌರವಿಸೋಣ.

#ಕನ್ನಡಿಗರವಿಜಯದಿನ 💛❤️

06/04/2025

ತೇಜಸ್ವಿಯರು ಶಾಲೆಯಲ್ಲಿ ಓದುತ್ತಿದ್ದಾಗ ಮೇಷ್ಟ್ರರೊಬ್ಬರು ಕುವೆಂಪು ಅವರ ಕವನ ವಾಚಿಸುತ್ತಾ, ಕುವೆಂಪು ಅವರು ಕಾವ್ಯ ರಚನೆ ಮಾಡುವಾಗ ಮಾಂಸಹಾರವನ್ನು ಸಂಪೂರ್ಣವಾಗಿ ತ್ಯಜಿಸಿ, ಮಡಿ ಉಟ್ಟಿರುತ್ತಾರೆ.. ಎಂದು ಹೇಳಿದರಂತೆ ಅದನ್ನ ತೇಜಸ್ವಿಯವರು ಮನೆಗೆ ಬಂದು ತಂದೆಯವರಲ್ಲಿ ವಿಚಾರಿಸಿದಾಗ ಕುವೆಂಪು ಅವರ ಉತ್ತರ ಹೀಗಿತ್ತೆಂದು ಅಣ್ಣನ ನೆನಪು ಪುಸ್ತಕದಲ್ಲಿ ದಾಖಲಿಸಿದ್ದಾರೆ.....

ವೇದೋಪನಿಷತ್ತುಗಳನ್ನು ಬರೆದವರು ದನದ ಮಾಂಸ ತಿನ್ನುತ್ತಿದ್ದರೆನ್ನುವುದು, ರಾಮಾಯಣ ಬರೆದ ವಾಲ್ಮಿಕಿ ಶಿಕಾರಿ ಮಾಡುತ್ತಿದ್ದ ವ್ಯಾಧನಾಗಿದ್ದನೆನ್ನುವುದು ಆ ಮುಠ್ಠಾಳ ಮೇಷ್ಟ್ರಿಗೆ ಗೊತ್ತಿಲ್ಲ. ಈ ಮಡಿ ಹೆಂಗಸರಂತಹ ಮೇಷ್ಟ್ರುಗಳು ನಿಮಗೆ ಹೇಳಿ ಕೊಡುವುದಾದರು ಏನು? ಅವಿವೇಕಿಗಳು ಪದ್ಯ ಬರೆಯುವವರು ಪಥ್ಯದಲ್ಲಿರಬೇಕು ಎನ್ನುವ ಕಂದಾಚಾರ ನಂಬಿದ್ದಾರಲ್ಲ. ಹಿಂದೂ ಧರ್ಮಕ್ಕೆ ಇದಕ್ಕಿಂತ ದುರ್ಗತಿ ಇದೆಯೇ? ಹೋಗಲಿ ನೀನಾದರೂ ಇದೆಲ್ಲಾ ತಪ್ಪು ಎನ್ನುವುದನ್ನು ತಿಳಿದುಕೊ. ""ಇನ್ನೊಮ್ಮೆ ಮೇಷ್ಟ್ರು ಹಾಗೇನಾದ್ರು ಹೇಳಿದ್ರೆ? ಮೇಷ್ಟ್ರೇ ನೀವು ಹೇಳೋ ಹಾಗೇನು ಇಲ್ಲ ನಾವು ದನದ ಮಾಂಸ ಸಹ ಸಿಕ್ಕರೆ ತಿನ್ನುತ್ತೇವೆ, ನಾವು ಹಿಂದೂಗಳೇ ಅಲ್ಲ ಅಂತ ಹೇಳಿಬಿಡು"" ಎಂದು ನನಗೆ ಕೋಪೋದ್ರಿಕ್ತರಾಗಿ ಹೇಳಿದರು....

ತೇಜಸ್ವಿಯವರು ಬರೆದ ಅಣ್ಣನ ನೆನಪು ಪುಸ್ತಕದಿಂದ ಪುಟ ೬೨,೬೩.,

“ನೆಯ್ದಾಳುತಿದೆ ಜಗವನೊಂದತಿವಿರಾಣ್ ಮನಂ,
ಸೂಕ್ಷ್ಮಾತಿ ಸೂಕ್ಷ್ಮ ತಂತ್ರದಿ ಬಿಗಿದು ಕಟ್ಟಿಯಂ
ಜೀವಿಗಳ್ಗಿಚ್ಛೆಯಾ ಸ್ವಾತಂತ್ರ್ಯಭಾವಮಂ ನೀಡಿ”

~ ಶ್ರೀ ರಾಮಾಯಣ ದರ್ಶನಂ | ಕುವೆಂಪು

Pc: Rajendra Prasad

#ಕುವೆಂಪು

04/04/2025

ಕ್ರಿ.ಶ. 618ರಲ್ಲಿ ಕನೌಜ್‌ನ ದೊರೆ ಹರ್ಷವರ್ಧನನು ದಕ್ಷಿಣದಲ್ಲಿ ಸಾಮ್ರಾಜ್ಯ ವಿಸ್ತರಣೆಗೆ ಮುಂದಾದಾಗ, ಕನ್ನಡದ ಚಾಲುಕ್ಯ ದೊರೆ ಇಮ್ಮಡಿ ಪುಲಕೇಶಿ ಮಹಾರಾಜರು ನರ್ಮದಾ ನದಿಯ ದಡದಲ್ಲೇ ಮಣಿಸಿ ‘ದಕ್ಷಿಣ ಪಥೇಶ್ವರ’ ಎಂಬ ಬಿರುದು ಪಡೆದ ಈ ದಿನವನ್ನು ‘ಕನ್ನಡಿಗರ ವಿಜಯ ದಿನ’ವೆಂದು ಆಚರಿಸಿ, ವೀರ ಪರಾಕ್ರಮಿಗೆ ಗೌರವಿಸೋಣ.

#ಕನ್ನಡಿಗರವಿಜಯದಿನ

04/04/2025
03/04/2025

ಏಪ್ರಿಲ್ 4: ಕನ್ನಡಿಗರ ವಿಜಯೋತ್ಸವ

ಏಪ್ರಿಲ್ 4ನೇ ತಾರೀಖು ಕನ್ನಡಿಗರ ಐತಿಹಾಸಿಕ ವಿಜಯದ ದಿನ! ಈ ಮಹತ್ತ್ವದ ದಿನದಲ್ಲಿ, ನಮ್ಮ ಶ್ರೀಮಂತ ಪರಂಪರೆಯ ಹೆಮ್ಮೆಯ ಚಕ್ರವರ್ತಿ ಪುಲಿಕೇಶಿ ದ್ವಿತೀಯ, ಉತ್ತರ ಭಾರತದ ರಾಜ ಹರ್ಷವರ್ಧನನನ್ನು ಸೋಲಿಸಿ, ದಕ್ಷಿಣ ಭಾರತದ ಸ್ವಾಯತ್ತತೆಯನ್ನು ಕಾಪಾಡಿದರು.

ನರ್ಮದೆ ನದಿ ತೀರದಲ್ಲಿ ನಡೆದ ಈ ಮಹಾಯುದ್ಧದಲ್ಲಿ, ಪುಲಿಕೇಶಿಯ ದಿಟ್ಟ ತಂತ್ರಗಾರಿಕೆ ಮತ್ತು ಅಪ್ರತಿಮ ಶೌರ್ಯ ಹರ್ಷವರ್ಧನನ ಆಕ್ರಮಣವನ್ನು ತಡೆಹಿಡಿಯಿತು. ಈ ವಿಜಯ ಕನ್ನಡಿಗರ ವೀರತೆ, ಶಕ್ತಿ ಮತ್ತು ಸ್ವಾಭಿಮಾನವನ್ನು ಸಾರುವ ಅದ್ವಿತೀಯ ಘಟನೆ. ಈ ಸಮರದ ನಂತರ, ಉತ್ತರ ಭಾರತದ ಸಿಂಹಾಸನಾಧಿಪತಿಯಾದ ಹರ್ಷವರ್ಧನ ಕನ್ನಡಿಗರಿಗೆ ತಲೆತಗ್ಗಿಸಬೇಕಾಯಿತು.

ಇಂತಹ ಮಹೋನ್ನತ ವಿಜಯವನ್ನು ಕನ್ನಡ ನಾಡು ಮತ್ತು ಜನತೆ ಸದಾ ಗೌರವಿಸಬೇಕು. ಈ ಏಪ್ರಿಲ್ 4 ಕನ್ನಡಿಗರ ಪರಾಕ್ರಮದ ಸಂಕೇತವಾಗಿ, ಹಬ್ಬದಂತೆ ಆಚರಿಸೋಣ! ಪುಲಿಕೇಶಿಯ ದಕ್ಷ ಆಡಳಿತ, ಕನ್ನಡ ನಾಡಿನ ವೈಭವ ಮತ್ತು ನಮ್ಮ ಸಾಂಸ್ಕೃತಿಕ ಶ್ರೀಮಂತಿಕೆಯನ್ನ ಕೊಂಡಾಡೋಣ.

ಇದು ನಮ್ಮ ಇತಿಹಾಸವನ್ನು ಸಂಭ್ರಮಿಸುವ ದಿನ! ಈ ದಿನ ಪರಂಪರೆ, ಭಾಷೆ, ನಾಡು ಮತ್ತು ನುಡಿಯ ಗೌರವವನ್ನು ಸಾರೋಣ. ಪುಲಿಕೇಶಿ ನಮ್ಮ ಗೌರವದ ಸಂಕೇತ, ನಮ್ಮ ಹೃದಯದ ಸ್ಪಂದನ!

ಜಯ ಕನ್ನಡಾಂಬೆ! ಜಯ ಪುಲಿಕೇಶಿ! ಜಯ ಜಯ ಕರ್ನಾಟಕ!! ಜಯ ಜಯ ಚಾಲುಕ್ಯ ಚಕ್ರೇಶ್ವರ.

#ಕನ್ನಡ #ಕನ್ನಡಿಗ #ಕರ್ನಾಟಕ #ಹೆಮ್ಮಯಕನ್ನಡಿಗ & chats

#ದಾವಣಗೆರೆ_ರಾಯಣ್ಣ

03/04/2025

Address

Alllen Safalya Road, Old Rajeev Gandhi Nagar
Kota
324005

Telephone

+918867231469

Website

Alerts

Be the first to know and let us send you an email when Dosa Camp posts news and promotions. Your email address will not be used for any other purpose, and you can unsubscribe at any time.

Share

Category