08/06/2023
ಸಹೃದಯೀ ಕಲಾಭಿಮಾನಿಗಳೆ,
"ಕಲಾ ಸಾಹಿತ್ಯ ಪರಿಚಾರಕರು" ಬಳಗ ಮತ್ತು "ಎಂ.ಡಿ.ಪಿ ಕಾಫಿ ಹೋಟೆಲ್" ಬಳಗದವರು ಸಂಯುಕ್ತವಾಗಿ ತಾ 03.06.2023 ರಂದು ಸಂಜೆ ಹೋಟೆಲ್ ಆವರಣದಲ್ಲಿನ " ಹೊಂಗೆ ಮರ" ವೇದಿಕೆಯಲ್ಲಿ "ಜ್ಯೇಷ್ಟ ಗಾಳಿಯ ಗಾಯನ ಗಂಧ" ಎಂಬ ಶೀರ್ಷಿಕೆ ಅಡಿಯಲ್ಲಿ ಶ್ರೀಮತಿ ಸಿ ಚೈತ್ರಾ, ವ್ಯವಸ್ಥಾಪಕರು ,ತಾಲೂಕು ಪಂಚಾಯತಿ ಕಛೇರಿ ಹೊಸಕೋಟೆ, ಅವರಿಂದ " ಕರ್ನಾಟಕ ಸಂಗೀತ ಕಾರ್ಯಕ್ರಮ ಏರ್ಪಡಿಸಿದ್ದುದು ಸರಿಯಷ್ಟೇ.
ಕಾರ್ಯಕ್ರಮ ಸಂಜೆ 7.00ಕ್ಕೆ ಶ್ರೀಮತಿ ಶಂಕುಂತಲಾ ಉಪಾಧ್ಯಾಯಿನಿ ಅವರ ನಿರೂಪಣೆಯಲ್ಲಿ ಪ್ರಾರಂಭವಾಗಿ ಸುಲಲಿತವಾಗಿ ನಲವತೈದು ನಿಮಿಷಗಳ ಕಾಲ ಹಲವಾರು ಕೀರ್ತನೆಗಳಿಂದ ಸಂಪನ್ನವಾಯಿತು.
ಶ್ರೀಮತಿ ಚೈತ್ರಾರವರು ಸಂಗೀತದಲ್ಲಿ ಸೀನಿಯರ್ ಪದವಿ ಪಡೆದಿದ್ದು ನವಿರಾದ ಧ್ವನಿಯನ್ನು ಹೊಂದಿದ್ದು ಯಾವುದೇ ಪಕ್ಕವಾದ್ಯ ಶ್ರುತಿ ಗಳಿಲ್ಲದೇ ಕಾರ್ಯಕ್ರಮವನ್ನು ಸುಂದರವಾಗಿ ರೂಪಿಸಿ ಮಂಡಿಸಿದರು.
ಎರಡು ದಿನದಿಂದ ಕಲಾಭಿಮಾನಿಗಳಿಂದ ನಮಗೆ ಮೆಚ್ಚುಗೆಯ ಪ್ರತಿಕ್ರಿಯೆ ಬರುತ್ತಿವೆ. ಶ್ರೀಮತಿ ಚೈತ್ರಾರವರಿಗೆ ಆಹ್ವಾನ ಮನ್ನಿಸಿ ಬಂದು ಹಾಡಿದ್ದಕ್ಕೆ ವಂದಿಸಿ ಅವರಿಗೆ ಶುಭಕೊರುತ್ತೇವೆ.
ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹಿಸಿದ ಎಲ್ಲರಿಗೂ ವಂದನೆಗಳು.
MDP Coffee House Hoskote The Sunshine Library ಹೊಂಗೆ ಮರ