Kannada varthe

Kannada varthe Kannada Varthe| ಕನ್ನಡ ವಾತೆ೯
News and Media




(1)

07/06/2026

"ಕರವೇ ಸ್ವಾಭಿಮಾನಿ ಬಣದಿಂದ ಹಸಿರು ಕ್ರಾಂತಿಯ ಮಹಾ ಸಂಕಲ್ಪ!: ಕಾರ್ಮಿಕ ಘಟಕದ ಅಧ್ಯಕ್ಷ ರವಿರೆಡ್ಡಿ ನೇತೃತ್ವದಲ್ಲಿ ಗಿಡ ನೆಡುವ ಹಬ್ಬ!"

ಕನ್ನಡ, ನಾಡು, ನುಡಿ, ಜಲದ ಜೊತೆಗೆ ನಾಡಿನ ಪರಿಸರವನ್ನು ಉಳಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂಬ ಉದಾತ್ತ ಧ್ಯೇಯದೊಂದಿಗೆ ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ವತಿಯಿಂದ ಬೆಂಗಳೂರಿನಲ್ಲಿ ಇಂದು ಅತ್ಯಂತ ಅರ್ಥಪೂರ್ಣವಾಗಿ ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಇತ್ತೀಚಿನ ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಹೆಚ್ಚಾಗುತ್ತಿರುವ ತಾಪಮಾನ ಮತ್ತು ಮಾಲಿನ್ಯಕ್ಕೆ ಬ್ರೇಕ್ ಹಾಕಲು ಹಸಿರೀಕರಣವೇ ಏಕೈಕ ಮದ್ದು ಎಂದು ಸಾರಿದ ಕರವೇ ಕಾರ್ಯಕರ್ತರು, ಸಾರ್ವಜನಿಕ ಉದ್ಯಾನವನಗಳು ಹಾಗೂ ರಸ್ತೆಗಳ ಇಕ್ಕೆಲಗಳಲ್ಲಿ ಗಿಡಗಳನ್ನು ನೆಡುವ ಮೂಲಕ ಹಸಿರು ಆಂದೋಲನಕ್ಕೆ ಭವ್ಯ ಚಾಲನೆ ನೀಡಿದರು.

ಇನ್ನು ಈ ಜನಪರ ಪರಿಸರ ಕಾರ್ಯಕ್ರಮದ ಸಂಪೂರ್ಣ ನೇತೃತ್ವವನ್ನು ಕರ್ನಾಟಕ ರಕ್ಷಣಾ ವೇದಿಕೆ (ಸ್ವಾಭಿಮಾನಿ ಬಣ) ಬೆಂಗಳೂರು ಕಾರ್ಮಿಕ ಘಟಕದ ಜನಪ್ರಿಯ ಅಧ್ಯಕ್ಷರಾದ ರವಿರೆಡ್ಡಿ ಅವರು ವಹಿಸಿ ಯಶಸ್ವಿಯಾಗಿ ಮುನ್ನಡೆಸಿದರು. ಖುದ್ದಾಗಿ ತಾವೇ ಗಿಡಗಳನ್ನು ನೆಟ್ಟು ನೀರು ಉಣಿಸುವ ಮೂಲಕ ಸಾರ್ವಜನಿಕರಲ್ಲಿ ಪರಿಸರ ಪ್ರೇಮದ ಜಾಗೃತಿ ಮೂಡಿಸಿದ ಕರವೇ ಕಾರ್ಮಿಕ ಘಟಕದ ಅಧ್ಯಕ್ಷ ರವಿರೆಡ್ಡಿ ಅವರು, "ಕೇವಲ ಗಿಡ ನೆಟ್ಟು ಫೋಟೋ ತೆಗೆಸಿಕೊಳ್ಳುವುದಷ್ಟೇ ನಮ್ಮ ಉದ್ದೇಶವಾಗಬಾರದು. ನಾವು ನೆಟ್ಟ ಪ್ರತಿಯೊಂದು ಗಿಡವನ್ನೂ ಮರದಂತೆ ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕು. ಕಾರ್ಮಿಕ ಬಂಧುಗಳು ಹಾಗೂ ಸಾರ್ವಜನಿಕರು ಒಟ್ಟಾಗಿ ಪರಿಸರವನ್ನು ರಕ್ಷಿಸಬೇಕಿದೆ" ಎಂದು ಕಳಕಳಿಯ ಮನವಿ ಮಾಡಿದರು.

ಈ ಭವ್ಯ ಗಿಡ ನೆಡುವ ಕಾರ್ಯಕ್ರಮದಲ್ಲಿ ಕರವೇ ಸ್ವಾಭಿಮಾನಿ ಬಣದ ಬೆಂಗಳೂರು ಕಾರ್ಮಿಕ ಘಟಕದ ಹಿರಿಯ ಮುಖಂಡರು, ನೂರಾರು ಕಾರ್ಮಿಕ ಬಂಧುಗಳು, ಕರವೇ ಸೈನಿಕರು ಹಾಗೂ ಸ್ಥಳೀಯ ಸಾರ್ವಜನಿಕರು ಅತ್ಯಂತ ಉತ್ಸಾಹದಿಂದ ಭಾಗವಹಿಸಿದ್ದರು. ಕರವೇ ಕಾರ್ಮಿಕ ಘಟಕದ ಅಧ್ಯಕ್ಷರಾದ ರವಿರೆಡ್ಡಿ ಅವರ ಈ ಪರಿಸರಸ್ನೇಹಿ ಮತ್ತು ಜನಪರ ಕಾರ್ಯಕ್ಕೆ ಸಾರ್ವಜನಿಕ ವಲಯದಿಂದ ಭಾರಿ ಪ್ರಶಂಸೆ ವ್ಯಕ್ತವಾಗಿದ್ದು, ಮುಂದಿನ ದಿನಗಳಲ್ಲೂ ಇಡೀ ಬೆಂಗಳೂರಿನಾದ್ಯಂತ ಕರವೇ ವತಿಯಿಂದ ಇಂತಹ ಹಸಿರು ಕ್ರಾಂತಿಯ ಕೆಲಸಗಳು ನಿರಂತರವಾಗಿ ನಡೆಯಲಿ ಎಂದು ಸಾರ್ವಜನಿಕರು ಆಶಿಸಿದರು.

06/06/2026
05/06/2026

ಡಿ ಕೆ ಶಿವಕುಮಾರ್ ಸಿ ಎಂ ಆದ ಸಂಭ್ರಮ; ದೊಡ್ಡನಾಗಮಂಗಲ ವಸಂತ್ ಮತ್ತು ಕಾಂಗ್ರೆಸ್ ಮುಖಂಡರಿಂದ ಸಿಹಿ ಹಂಚಿ ಪಟಾಕಿ ಸಿಡಿಸಿ ಭರ್ಜರಿ ಸಂಭ್ರಮಾಚರಣೆ.

05/06/2026

ಪೆದ್ದಿ ಪ್ರೀಮಿಯರ್ ಶೋಗೆ ಭರ್ಜರಿ ರೆಸ್ಪಾನ್ಸ್; ಸಿನಿಮಾಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಭಿಮಾನಿಗಳು

"ನಮ್ಮ ಭೂಮಿ – ನಮ್ಮ ಜವಾಬ್ದಾರಿ"ಪರಿಸರ ಸಂರಕ್ಷಣೆಯ ಸಂಕಲ್ಪದೊಂದಿಗೆ ಎಲ್ಲರಿಗೂವಿಶ್ವ ಪರಿಸರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಶುಭ ಕೋರುವವರು:ಕ...
05/06/2026

"ನಮ್ಮ ಭೂಮಿ – ನಮ್ಮ ಜವಾಬ್ದಾರಿ"

ಪರಿಸರ ಸಂರಕ್ಷಣೆಯ ಸಂಕಲ್ಪದೊಂದಿಗೆ ಎಲ್ಲರಿಗೂ
ವಿಶ್ವ ಪರಿಸರ ದಿನಾಚರಣೆಯ ಹಾರ್ದಿಕ ಶುಭಾಶಯಗಳು.

ಶುಭ ಕೋರುವವರು:
ಕನ್ನಡ ವಾರ್ತೆ

🌱 ಹಸಿರು ಉಳಿಸಿ – ಭವಿಷ್ಯ ಬೆಳೆಸಿ 🌱

04/06/2026

"ಗುಂಜೂರಿನಲ್ಲಿ ದಲಿತರ ಜಮೀನಿಗೆ ಸಂಚು!: ಮುನಿಯಮ್ಮನ ಕೋಟಿ ಕೋಟಿ ಆಸ್ತಿ ಕಬಳಿಸಲು ಗೋಪಾಲ್ ರೆಡ್ಡಿ ಗ್ಯಾಂಗ್ ಮಹಾ ಪ್ಲಾನ್!"

04/06/2026

ವಣಕನಹಳ್ಳಿ ಗ್ರಾಮ ಪಂಚಾಯಿತಿ ೨೦೨೩-೨೪ನೇ ಸಾಲಿನ ಮೊದಲನೇ ಸುತ್ತಿನ ಗ್ರಾಮಸಭೆ

04/06/2026

"ಆನೇಕಲ್ ನಗರ ಇವತ್ತು ಕಂಪ್ಲೀಟ್ ಡೆತ್ ಝೋನ್!: ಅಧಿಕಾರಿಗಳ ಕಮಿಷನ್ ದಂಧೆಗೆ ಅಮಾಯಕರ ಬಲಿ ಅಂತ ರಸ್ತೆಗಿಳಿದು ಗುಡುಗಿದ ಕೇಸರಿ ಪಡೆ!

04/06/2026

"ಸಾರ್ವಜನಿಕರ ಜೀವದ ಜೊತೆ ಆಟವಾಡಬೇಡಿ!: ಆನೇಕಲ್‌ನಲ್ಲಿ ಖಡಕ್
ಹೋರಾಟಕ್ಕೆ ಇಳಿದ ಬಿಜೆಪಿ.. ಅಧಿಕಾರಿಗಳಿಗೆ ತಟ್ಟಿದ ಪ್ರತಿಭಟನೆಯ ಬಿಸಿ!"

04/06/2026

"ಕನಕಪುರದ ಬಂಡೆಗೆ ಸಿಎಂ ಪಟ್ಟ; ಇಡೀ ರಾಜ್ಯದಲ್ಲೇ ಹಬ್ಬದ ವಾತಾವರಣ!: ನವ ಕರ್ನಾಟಕದ ನಾಯಕನಿಗೆ ಶುಭಕೋರಿದ ಎಸ್‌ಸಿ-ಎಸ್‌ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮುನಿರಾಜು!"

ಕರ್ನಾಟಕ ರಾಜ್ಯದ ಅತ್ಯಂತ ಜನಪ್ರಿಯ, ವರ್ಚಸ್ವಿ ಹಾಗೂ ಧೀಮಂತ ನಾಯಕರಾದ ಶ್ರೀಯುತ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ನೂತನ ಮುಖ್ಯಮಂತ್ರಿಗಳಾಗಿ ಅಧಿಕಾರ ಸ್ವೀಕರಿಸಿರುವುದು ಇಡೀ ನಾಡಿನಾದ್ಯಂತ ಹೊಸ ಸಂಚಲನ ಮತ್ತು ಹಬ್ಬದ ವಾತಾವರಣ ಮೂಡಿಸಿದೆ. ಕೈ ಪಾಳಯದ ಧೀಮಂತ ಸಾರಥಿ, ಕಷ್ಟಕಾಲದಲ್ಲಿ ಪಕ್ಷದ ಬೆನ್ನೆಲುಬಾಗಿ ನಿಂತ ಸಂಘಟನಾ ಚತುರ ಡಿ.ಕೆ. ಶಿವಕುಮಾರ್ ಅವರಿಗೆ ಇಡೀ ಸಾರ್ವಜನಿಕ ವಲಯ ಹಾಗೂ ಪಕ್ಷದ ಕಾರ್ಯಕರ್ತರಿಂದ ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ. ಇದೇ ದಿವ್ಯ ಸಂದರ್ಭದಲ್ಲಿ ಆನೇಕಲ್ ಕ್ಷೇತ್ರದ ಪ್ರಭಾವಿ ನಾಯಕರು ಹಾಗೂ ಎಸ್‌ಸಿ-ಎಸ್‌ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಮುನಿರಾಜು ಗೊಟ್ಟಿಗೆರೆ ಅವರು ನೂತನ ಮುಖ್ಯಮಂತ್ರಿಗಳಿಗೆ ತಮ್ಮ ಹಾಗೂ ತಮ್ಮ ಒಡನಾಡಿಗಳ ಪರವಾಗಿ ಹೃತ್ತೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

Address

Bangalore

Alerts

Be the first to know and let us send you an email when Kannada varthe posts news and promotions. Your email address will not be used for any other purpose, and you can unsubscribe at any time.

Share